Slide
Slide
Slide
previous arrow
next arrow

ಹೇರೂರಿನಲ್ಲಿ ದಶಸಹಸ್ರ ದೀಪೋತ್ಸವ ಸಂಪನ್ನ

300x250 AD

ಸಿದ್ದಾಪುರ: ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಪ್ರಯುಕ್ತ ತಾಲೂಕಿನ ಹೇರೂರಿನ ಸಿದ್ಧಿವಿನಾಯಕ ದೇವಾಲಯದಲ್ಲಿ ಜರುಗಿದ ದಶಸಹಸ್ರ ದೀಪೋತ್ಸವಕ್ಕೆ ಶ್ರೀಮನ್ನೆಲೆಮಾವಿನ ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಗಳು ಸೋಮವಾರ ಚಾಲನೆ ನೀಡಿದರು.
ನಂತರ ದೇವಸ್ಥಾನದ ಆಡಳಿತ ಮಂಡಳಿಯವರು, ಭಕ್ತರು ದಶಸಹಸ್ರ ದೀಪೋತ್ಸವವನ್ನು ಭಕ್ತಿಯಿಂದ ಆಚರಿಸಿದರು. ವಿ.ವಿಶ್ವನಾಥ ಭಟ್ಟ ನೀರಗಾನ ಇವರಿಂದ ವಿಶೇಷ ಉಪನ್ಯಾಸ ಹಾಗೂ ಅಯೋಧ್ಯಾ ಕರಸೇವಕರಿಗೆ ಗೌರವ ಸಮರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದಶಸಹಸ್ರ ದೀಪೋತ್ಸವದ ಪ್ರಾಯೋಜಕರಾದ ಡಾ.ಪ್ರಕಾಶ ಹೆಗಡೆ ಕಣಗಲಕೋಣೆ(ಅಮೇರಿಕಾ), ಎಂ.ಜಿ.ಹೆಗಡೆ ತ್ಯಾರ್ಗಲ್, ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಶ್ರೀರಾಮ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top